ಭಾನುವಾರ, ಏಪ್ರಿಲ್ 2, 2023

ನಟಿ ಶೃತಿ ಕ್ಯಾಸನೂರು ನಾಟಿ ಅಡಿಕೆ ತೋಟ ಫುಲ್ ವೈರಲ್

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ನಟಿ ಶ್ರುತಿ ಅವರ ಬಗ್ಗೆ ನಾವು ಹೇಳಹೊರಟಿರುವುದು. ಭಾವನಾತ್ಮಕ ಪಾತ್ರಗಳನ್ನು ಇವರಿಗಿಂತ ಚೆನ್ನಾಗಿ ನಿರ್ವಹಿಸಬಲ್ಲ ನಟಿ ಇಡೀ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಎನ್ನಬಹುದು. ಇವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡವರು. ಅಲ್ಲದೇ ರಾಜಕಾರಣದಲ್ಲೋ ತಮ್ಮದೇ ಆದ ಚಾಪು ಮೂಡಿಸಿದವರು. ಮಹಿಳೆಯಾಗಿ, ನಟಿಯಾಗಿ, ರಾಜಕಾರಣಿಯಾಗಿ, ಗೃಹಿಣಿಯಾಗಿರುವುದಲ್ಲದೇ ಈಗ ಕೃಷಿ ರಂಗದಲ್ಲೂ ತೊಡಗಿಸಿಕೊಂಡು ಅಡಿಕೆ ತೋಟ ಮಾಡಲು ಮುಂದಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ:  ಕೆಜಿಎಫ್ ಯಶ್ ಅಡಿಕೆ ತೋಟ

ತಮ್ಮ ಜಮೀನಿನಲ್ಲಿ ಒಳ್ಳೆಯ ಬೆಳೆಮಾಡಬೇಕು ಅಂದುಕೊಂಡಿದ್ದ ಶೃತಿಯವರಿಗೆ ಅಪ್ಪು ಅವರು ಕ್ಯಾಸನೂರು ನಾಟಿ ತಳಿಯ ಅಡಿಕೆ ಬೆಳೆಯಲು ಸಲಹೆ ನೀಡಿದ್ದರಂತೆ. ತಂದೆ ಕೃಷ್ಣ ಅವರಿಗೂ ಇದೆ ಮನದಾಸೆಯಾಗಿತ್ತಂತೆ. ಇವರೆಲ್ಲರ ಸಲಹೆಯಂತೆ ಪತ್ರಕರ್ತ ಮಹಾಬಲೇಶ್ವರ ಅವರ ಸಲಹೆ ಮೆರೆಗೆ ಕ್ಯಾಸನೂರು ಅಡಿಕೆ ಸಸಿಗಳ ಬಗ್ಗೆ ವಿಚಾರಿಸಿ ಮಾಹಿತಿ ಕಲೆಹಾಕಿಕೊಂಡರು. ಅಧಿಕ ಇಳುವರಿ, ಸದೃಢ ಮರಗಳಾಗಿ ಬಾಳಿಕೆಬರಲು ಕ್ಯಾಸನೂರು ಅಡಿಕೆ ಸೂಕ್ತ ಎಂದು ಅರಿತುಕೊಂಡ ಕೋಡಲೇ ಕ್ಯಾಸನೂರು ಅಡಿಕೆ ಬೆಳೆಯುವ ಕ್ಯಾಸನೂರು ರಾಮಚಂದ್ರ ಕುಶೇನ್ ಇವರನ್ನ ದೂರವಾಣಿ ಮುಕಾಂತರ ಸಂಪರ್ಕಿಸಿ ಒಂದು ವರ್ಷ ಮೊದಲೇ ಅಡ್ವಾನ್ಸ್ ನೀಡಿ ಬುಕ್ ಮಾಡಿದ್ದರು. ಈಗ ಒಳ್ಳೆಯ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ.
ಇವರ ಪ್ರಮುಖ ಚಿತ್ರಗಳೆಂದರೆ ಗೌರಿ ಗಣೇಶ, ಅಕ್ಕ-ತಂಗಿ, ಕಲ್ಕಿ, ಗೌಡ್ರು, ಪುಟ್ಟಕ್ಕನ ಹೈವೇ ಇತ್ಯಾದಿ ಚಿತ್ರಗಳು ಅವರ ಸಿನಿ ಜೀವನದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದ ಚಿತ್ರಗಳಾಗಿ ಮೂಡಿಬಂದಿದೆ.

ಕನ್ನಡದ ಒಂದು ಕಾಲದ ಟಾಪ್ ನಟಿ ಶ್ರುತಿ ಅವರ ನಿಜವಾದ ಹೆಸರು ಪ್ರಿಯದರ್ಶಿನಿ. ಮೂಲತಃ ಕಾರಾಂತಕದ ಹಾಸನ ಜಿಲ್ಲೆಯಲ್ಲಿ ಹುಟ್ಟಿದ ನಟಿ ಶ್ರುತಿ ರಂಗ ಭೂಮಿ ಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ, ನಂತರ ಮಲಯಾಳಂ ಭಾಷೆಯ “ಸ್ವಂತಂ ಇನ್ನು ಕಾರುತಿ” ಸಿನಿಮಾದಲ್ಲಿ ಮೊದಲು ನಟನೆ ಮಾಡಿದರು. ಆ ನಂತರ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ನಟಿ ಶ್ರುತಿ ಅವರ ಅದ್ಭುತ ನಟನೆಗೆ ಕರ್ನಾಟಕದ ಮನೆ ಮಾತಾದರು. ಆ ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ಸುಮಾರು ೧೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಶ್ರುತಿ. ಸದ್ಯ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ ತೋಟದಲ್ಲಿ ವಾಸವಾಗಿದ್ದಾರೆ.

ನಟಿ ಶ್ರುತಿ ಅವರು ಕರೋನ ಲಾಕ್ ಡೌನ್ ಆದ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಇಲ್ಲದ ಕಾರಣ, ತಮ್ಮ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ 25 ಎಕರೆ ತೋಟದಲ್ಲಿ ವಾಸವಾಗಿದ್ದರು. ತಮ್ಮ ತೋಟದಲ್ಲಿ ಪರಿಸರ ಸ್ನೇಹಿ ಮನೆಯನ್ನು ಸಿಮೆಂಟ್ ಬಳಸದೆ, ಕೇವಲ ಕಲ್ಲು ಮಣ್ಣಿನಿಂದ ಸುಂದರವಾದ ಮನೆಯೊಂದನ್ನು ಕಟ್ಟಿದ್ದಾರೆ.

ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಶೃತಿ ಅವರು ತಮ್ಮ ಅಭಿಮಾನಿಗಳೊಂದಿಗೆ ಅನೇಕ ವಿಡಿಯೋ ಫೋಟೋ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ. ಹಾಗೇ ಶೃತಿಯವರು ತಾವು ತಮ್ಮ ತೋಟದಲ್ಲಿ ನಿರ್ಮಿಸಿದ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದು ಕೊಂಡಿದ್ದಾರೆ. “ಪರಿಸರ ಸ್ನೇಹಿ ಮನೆ ಇದು, ಸಿಮೆಂಟ್ ಬಳಸದೆ ಗೋಡೆಗೆ ಕೇವಲ ಕಲ್ಲು, ಮಣ್ಣು, ಚಾವಣಿಗೆ ಬಿದಿರು, ತೆಂಗಿನಗರಿ. ಇದಕ್ಕೆ ಇಂಜಿನಿಯರ್ರು ನಾನೇ, ಮೇಸ್ತ್ರಿನು ನಾನೇ ” ಎಂದು ಬರೆದಿದ್ದಾರೆ.
ಕೃಷಿಯಲ್ಲಿ ಆಸಕ್ತಿ ಇರುವ ಅವರು ಸಾವಯುವ ಕೃಷಿ ಮೂಲಕ ತಮ್ಮ ತೋಟದಲ್ಲಿ ಅನೇಕ ತರಕಾರಿ ಬೆಳೆಸಿದ್ದಾರೆ. ಈ ತೋಟದಲ್ಲಿ ಕೇವಲ ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಾರೆ. ಅವರು ತಮ್ಮ ತೋಟದಲ್ಲಿ ಬೆಳೆದ ಮೊದಲ ಬೆಳೆಗೆ ತುಂಬಾ ಖುಷಿಗೊಂಡರು. ಹಾಗೂ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಳೆದಿದ್ದು ಸ್ವಲ್ಪವೇ ಆದರೂ ಆಗಿರುವ ಖುಷಿ ಮಾತ್ರ ಟನ್ ಗಟ್ಟಲೇ ಎಂದಿದ್ದಾರೆ.

http://surl.li/gbyap

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ