ಗುರುವಾರ, ಜೂನ್ 2, 2022

KGF ನಟ ಯಶ್ ಕ್ಯಾಸನೂರು ತಳಿ ಅಡಿಕೆ ತೋಟದ ಸಿದ್ದತೆ

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಿರುವುದು ಎಲ್ಲರಿಗೂ ಗೊತ್ತು. ಇದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಶಕ್ತಿಯನ್ನು ಇಡಿ ದೇಶಕ್ಕೆ ಮತ್ತು, ಹೊರದೇಶಕ್ಕೂ ಕೂಡ ಈ ಕೆಜಿಎಫ್ ಸಿನಿಮಾ ಮೂಲಕ ತೋರಿಸಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಕುಟುಂಬದ ಜೊತೆ ಈಗ ಕಾಣಿಸಿಕೊಳ್ಳುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಕುರಿತಾಗಿ ಇನ್ನೊಂದು ವಿಚಾರ ಹೊರಗಡೆ ಬೀಳುತ್ತಿದೆ.

ಯಶ್ ಅವರ ಮುಂದಿನ ಸಿನಿಮಾ ಯಾವುದು.? ಯಾರು ನಿರ್ದೇಶಕರು ಎನ್ನುವ ವಿಚಾರ ಇಷ್ಟರಲ್ಲೆ ತಿಳಿಯುತ್ತಿದ್ದು, ಯಶ್ ಅವರ 19ನೇ ಚಿತ್ರ ಸೆಟ್ಟೇರಲಿದೆಯಂತೆ. ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ ಎಂದು ಕೇಳಿಬರುತ್ತಿದೆ. ಕೆಜಿಎಫ್ ಸಿನಿಮಾ 50 ದಿನ ಪೂರೈಸಿದ ದಿನವೇ ಈ ಮಾಹಿತಿ ಹೊರ ಬೀಳುತ್ತಿದೆ ಎಂದು ಕೇಳಿ ಬಂದಿದೆ. ಹೌದು ಯಶ್ ಅವರು ಅವರ ತಂದೆ ತಾಯಿಗೆ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಒಂದು ಫಾರ್ಮ್ ಹೌಸ್ ಕೊಂಡುಕೊಂಡ ಯಶ್, ತೋಟಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಕೂಡ ನೀಡಿದ್ದಾರೆ. ತಂದೆ ತಾಯಿಗೆ ಹಾಗೂ ತಂಗಿಗೂ ಸಹ ದುಬಾರಿ ಗಿಫ್ಟ್ ನೀಡಿದ್ದಾರೆ. ಹಾಗೆ ತಂದೆ-ತಾಯಿಗೆ ಓಡಾಡಲು ಟಾಟಾ ವೆಲ್ಫೇರ್ ದುಬಾರಿ ಕಾರನ್ನು ಕೂಡ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ನಟನೆ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಸಾಹೇಬ್ರು ದರ್ಶನ ಸಾಹೇಬ್ರ ಹಾಗೆ ತೋಟ ಮಾಡೋಕೆ ಮುಂದಾಗಿದ್ದು ಈಗ ಸುದ್ದಿಯಾಗಿದೆ. ಯಶ್ ಅವರು ಈಗಾಗಲೇ ತೇಜ್ ನರ್ಸರಿಯ ಶಿವನಪುರ ರಮೇಶ ಅವರನ್ನ ಬೇಟಿಯಾಗಿ ಅಡಕೆ ತೋಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಹಳ ಕಡೆ ಕೇಳಿಪಟ್ಟ ಕ್ಯಾಸನೂರು ಅಡಿಕೆ ತಳಿ ಬೆಳೆಯಲು ಉತ್ಸುಕರಾಗಿದ್ದ ಯಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಪ್ರಾಯ ಪಡೆದ್ದಿದ್ದಾರೆ. ದರ್ಶನ ಅವರು ಕೂಡ ಕ್ಯಾಸನೂರಿನ ಮಹಾಬಲೇಶ್ವರ ಅವರ ಬಳಿ ಅಡಿಕೆ ಸಸಿ ಪಡೆದು ಹಾಕಿರುವ ತೋಟ ತೋರಿಸಿ ಇದೇ ತಳಿ ಹಾಕುವಂತೆ ಸಲಹೆ ನೀಡಿದದ್ದಾರೆಂದು ಶಿವಪುರ ರಮೇಶ್ ಮಾಧ್ಯಮಗಳ ಮುಂದೆ ಯಶ್ ಫ್ಲಾನ್ ಹೊರಹಾಕಿದ್ದಾರೆ. ಯಾವಾಗಲೂ ಅಡಿಕೆಗೆ ಅಧಿಕ ಬೆಲೆ ಇರುವುದರಿಂದ ಅಧಿಕ ಇಳುವರಿ ಕೊಡುವ ಸದೃಢ ಮರವಾಗುವ ಯಾವುದೇ ರೋಗರುಜನೆಗಳಿಗೆ ತುತ್ತಾಗದ ಕ್ಯಾಸನೂರು ಸ್ಥಳೀಯ ಅಡಿಕೆಯ ಸಸಿಗಳಿಗಾಗಿ ಕ್ಯಾಸನೂರು ಮಹಾಬಲೇಶ್ವರ ಅವರನ್ನ ಸಂಪರ್ಕಿಸಿದ್ದಾರೆಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಹಾಬಲೇಶ್ವರ ಪತ್ರಕರ್ತರಾಗಿ ಕನ್ನಡದ ಅನೇಕೆ ಚಾನೆಲ್‌ಗಳಲ್ಲಿ ಕೆಲಸ ಮಾಡಿ ಅಜ್ಜ ಮಾಡಿದ್ದ ತೋಟ ಮನೆ ನೋಡಿಕೊಂಡು ಕೃಷಿ ಬದುಕು ನಡೆಸುತ್ತಿದ್ದಾರೆ. ಇವರಲ್ಲಿ ಸಹಜವಾಗಿ ಆರ್ಗಾನಿಕ್ ಆಗಿ ಬೆಳೆದ ಆಯ್ದ ಬೀಜಗಳಿದ್ದ ಮಾಡಿದ ಉತ್ತಮ ಅಡಿಕೆ ಸಸಿಗಳನ್ನ ಮಾಡಿ ತಮ್ಮ ಸ್ನೇಹಿತರಿಗೆ ಮಾತ್ರ ಮಾರುತ್ತಾರೆಂದು ಶಿವನಪುರ ರಮೇಶ್ ಹೇಳಿದರು. ಈಗಾಗಲೆ ಶಿವನಪುರ ರಮೇಶ್ ಅನೇಕ ಸೆಲೆಬ್ರಿಟಿಗಳಿಗೆ ಇವರ ಬಳಿ ಅಡಿಕೆಸಸಿಗೆ ಸಂಪರ್ಕಿಸುತ್ತಾರೆ.
ಯಶ್ ಕೂಡ ಕೃಷಿ ಒಲವು ಹೊಂದಿದ್ದು ದರ್ಶನ್ ತರ ಒಂದೊಳ್ಳೆ ಫಾರ್ಮ್ ಅದರ ಜೊತೆಗೆ ಅಡಿಕೆ ತೋಟ ಮಾಡುವ ಇಚ್ಚೆ ನೋಡಿದರೇ ಎಂಥವರಿಗೂ ಹೆಮ್ಮೆ ಎನ್ನಿಸುತ್ತಿದೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ