ಸೋಮವಾರ, ಜೂನ್ 6, 2022

ಅಡಿಕೆ ಕೊಳೆ ನಿಯಂತ್ರಣ ಮಾಡುದು ಹೇಗೆ....

ಮಳೆಗಾಲ  ಇನ್ನೇನು ಪ್ರಾರಂಭವಾಗಲಿದೆ. ಅಡಿಕೆಗೆ ಕೊಳೆಗಾಲ. ಅಂದರೆ  ಮಳೆ  ಬಿದ್ದ 15 ದಿನ  ನಂತರ  ಕೊಳೆ ಫಂಗಸ್  ಎಳೆಗಾಯಿಗಳ  ತೊಟ್ಟುಗಳನ್ನು ಪ್ರವೇಸಿಸಿ ಅಭಿರುದ್ಧಿ ಹೊಂದುವುದು.  ಇದರಿಂದ   ತೊಟ್ಟುಗಳು ಕೊಳೆತು  ಎಳೆಗಾಯಿ ಉದುರುವುವು (ಜೂನ್ -ಜುಲೈ ). ಆಗಸ್ಟ್ ತಿಂಗಳಲ್ಲಿ  ಮಳೆ  ಹೆಚ್ಚಾಗಿ ಅರೆ ಬಲಿತ  ಅಡಿಕೆ ಸಿಪ್ಪೆ ಮೇಲೆ ಬೂದು ಬಣ್ಣದ  ಫಂಗಸ್  ಬೆಳೆದು  ಕೊಳೆಯುವದರಿಂದ  ನೀರ್ಗೋಳೆ ಉಂಟಾಗುವುದು.  ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ  ಬಲಿತ  ಕಾಯಿಗಳಿಗೆ  ಬೂದು  ಗೊಳೆ ಬರುವುದು.
ನಿರ್ವಹಣೆ
1) ಮಣ್ಣಿಗೆ 1 ಎಕರೆಗೆ  2 ಕ್ವಿoಟಾಲ್  ಕೃಷಿ  ಸುಣ್ಣ ಕೊಡಿ
2) ಕಳೆದ  ವರ್ಷ ಕೊಳೆ ಪೀಡಿತ  ಸತ್ತ  ಹಿಂಗಾರಗಳನ್ನು  ತೆಗೆಯಿರಿ
3) ಬಸಿಗಲುವೇಗಳನ್ನು  ಸ್ವಚ್ಛಗೊಳಿಸಿ, ಕೊಳೆಪೀಡಿತ ಉದುರಿದ ಕಾಯಿಗಳನ್ನು  ತೆಗೆಯಿರಿ
4) ಅಂತರ ಬೆಳೆಗಳ  ಮತ್ತು ಕಾಡುಮರಗಳ  ಹೆಚ್ಚುವರಿ ರೆಂಬೆ ಕೊಂಬೆಗಳನ್ನು  ಕತ್ತರಿಸಿ  ತೆಗೆಯಿರಿ
5) ತಟಸ್ತ ಗೊಳಿಸಿದ ( ರಸಸಾರ  6.5 ರಿಂದ 7.5 ) ಶೇಕಡಾ  1 ರ  ಬೋರ್ಡೊ ದ್ರಾವಣ  ಸಿಂಪರಿಸಿ. ಇದಕ್ಕೆ ಬದಲಾಗಿ   ಶೇ. O.25 ರ ( 200 ಲೀಟರ್ ನೀರಿಗೆ 500 ಗ್ರಾಂ ) ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಶೇo.2ರ ( 200 ಲೀಟರ್ ನೀರಿಗೆ  400ಗ್ರಾಂ ) ಮೆಟಲಕ್ಸಿಲ್ ಎಂ ಜಡ್ಸಿಂಪರಿಸಿ.) ಮಳೆ  ಹೆಚ್ಚು  ಬೀಳುವ  ಪ್ರದೇಶಗಳಲ್ಲಿ  ಬೋರ್ಡೋ ಸಿಂಪರಣೆ  ನಂತರ ಪ್ಲಾಸ್ಟಿಕ್ ಕೊಟ್ಟೆ ಕಟ್ಟಬಹುದು.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ