ಮಂಗಳವಾರ, ಜೂನ್ 14, 2022

ಅಡಿಕೆ ಸಸಿ ನೆಡುವಾಗ ಬಾಳೆ ನೆಟ್ಟರೆ ಏನು ಪರಿಣಾಮ?

ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಪ್ರಮಾಣ ಹೆಚ್ಚಳವಾಗಲು ಮುಖ್ಯ ಕಾರಣ ಸ್ಪರ್ಧೆ ಕೊಡುವ ಮಿಶ್ರ ಬೆಳೆ. ಅಡಿಕೆ ಸಸಿಗಳಲ್ಲಿ ಅಸಮತೋಲನ ಬೆಳವಣಿಗೆ, ಸಣಕಲು ಸಸ್ಯ , ಎಲೆಗಳು ಕಡಿಮೆ ಯಾಗುವುದು ಸರಿಯಾಗಿ ಬೆಳವಣಿಗೆ ಹೊಂದರೆ ಇರುವುದು,ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳುವ ಶಕ್ತಿ ಕಡಿಮೆಯಾಗುವುದು ಎಲ್ಲದಕ್ಕೂ ಕಾರಣ ಸೂಕ್ತವಲ್ಲದ ಮಿಶ್ರ ಬೆಳೆ. ಮೊದಲ ಒಂದೆರಡು ವರ್ಷ ಮಿಶ್ರ ಬೆಳೆಯಾಗಿ ಬಾಳೆ ಬೆಳೆಯುವುದು.

ಸಾಮಾನ್ಯವಾಗಿ ಹೆಚ್ಚಿನವರು ಅಡಿಕೆ ಸಸಿ ನೆಡುವಾಗ ಬಾಳೆ ನಾಟಿ ಮಾಡಲು ಬಯಸುತ್ತಾರೆ.

ಬಾಳೆ ಬೆಳೆದರೆ ಅಡಿಕೆ ತೋಟದ ಸ್ವಲ್ಪ ಖರ್ಚು ಹುಟ್ಟುತ್ತದೆ ಎಂಬುದು ಸರಿಯಾದರೂ ಅಡಿಕೆ ತೋಟವೇ ಮುಂದೆ ಹಾಳಾಗುತ್ತದೆ..

ಅಡಿಕೆ ಸಸಿ ನಾಟಿ ಮಾಡುವ ಸಮಯದಲ್ಲಿ ಬಾಳೆ ಬೆಳೆಸಿದರೆ ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಸಂಖ್ಯೆ ಹೆಚ್ಚುತ್ತದೆ.ಅಂತಹ ಅಡಿಕೆ ತೋಟದಲ್ಲಿ ಉತ್ತಮ ಫಸಲು ಬರುವುದಿಲ್ಲ.

ಇದನ್ನೂ ಓದಿ: ಕೆಳದಿಯ ಅರಸರ ಕಾಲದ ಅಡಿಕೆ ತಳಿ

ಮೊದಲ ಎರಡು ಮೂರು ವರ್ಷ ಬಾಳೆಗಿಂತ ಎರಡು ಪಾಲು ಹೆಚ್ಚು ಆದಾಯ ಕೊಡಬಲ್ಲ ಮಿಶ್ರ ಬೆಳೆಗಳು ಇವೆ.

ಅನನಾಸು, ಶುಂಠಿ, ಅರಶಿನ ಹಾಗೆಯೇ ಸಾಧ್ಯವಿದರೆ ಸ್ಪರ್ಧೆ ಮಾಡದಂತಹ ತರಕಾರಿ ಬೆಳೆಗಳನ್ನು ಬೆಳೆಯಬಹುದು.

ಅಡಿಕೆ ತೋಟದಲ್ಲಿ ಬಾಳೆ ಬೆಳೆದರೆ 2 ವರ್ಷವಾದರೂ ಬೆಳವಣಿಗೆ ಇಷ್ಟೇ.

ಅಡಿಕೆ – ಬಾಳೆ ಹೊಂದಿಕೆ ಇಲ್ಲ:

ಅಡಿಕೆ ಮತ್ತು ಬಾಳೆ ಎಲ್ಲಾ ಸಮಯದಲ್ಲೂ ಹೊಂದಾಣಿಕೆಯಾಗುವ ಬೆಳೆಗಳಲ್ಲ.

ಅಡಿಕೆ ಸಸಿಯ ಎಳೆ ಪ್ರಾಯದಲ್ಲಿ ಬಾಳೆಯನ್ನು ಬೆಳೆಸಿದರೆ ಎಳೆ ಪ್ರಾಯದ ಅಡಿಕೆ ಸಸಿಗಳ ಕೆಲವು ಅಗತ್ಯ ಬೆಳೆವಣಿಗೆಗೆ ತೊಂದರೆ ಉಂಟಾಗುತ್ತದೆ.

ಅಡಿಕೆ, ತೆಂಗು ಮುಂತಾದ ಧೀರ್ಘಾವಧಿಯ ಬೆಳೆಗಳಲ್ಲಿ ರೈತರು ಅನುಸರಿಸಬೇಕಾದ ಮಹತ್ವದ ಬೇಸಾಯ ಕ್ರಮ, ಎಳೆ ಪ್ರಾಯದ ಸೂಕ್ತ ನಿರ್ವಹಣೆ.

ಇದನ್ನೂ ಓದಿ: ಅಡಿಕೆ ಸಸಿಗಳಿಗೆ KGF to ಕ್ಯಾಸನೂರಿಗೆ ಯಶ್ ಪಯಣ

ಒಂದು ಅಡಿಕೆ ಸಸಿ ಒಂದು ವರ್ಷಕ್ಕೆ ಇಷ್ಟೇ ಬೆಳವಣಿಗೆ ಹೊಂದಬೇಕು, ಎರಡು ವರ್ಷಕ್ಕೆ ಇಷ್ಟು ಬೆಳವಣಿಗೆ ಹೊಂದ ಬೇಕು. ಮೂರನೇ ವರ್ಷಕ್ಕೆ ಹೂ ಗೊಂಚಲು ಬಿಡಬೇಕು ಎಂಬುದು ಅದರ ಬೆಳೆ ಶಾಸ್ತ್ರ.

ಪ್ರಾರಂಭದ ಎರಡು – ಮೂರು ವರ್ಷದ ಆರೈಕೆ ಮತ್ತು ಆ ಸಮಯದಲ್ಲಿ ಸಸಿಯ ಅಂತರ್ಗತ ಶಕ್ತಿ, ಅದರ ಜೀವಮಾನದ ಉತ್ಪಾದಕತೆಯನ್ನು ನಿರ್ಧರಿಸುತ್ತದೆ.

ಎಳೆ, ಪ್ರಾಯದಲ್ಲಿ ಅದನ್ನು ನಾವು ಹೆಚ್ಚು ನಿಗಾ ಕೊಟ್ಟು ಸಾಕಬೇಕು. ನಂತರ ಅದು ನಮ್ಮನ್ನು ಸಾಕುತ್ತದೆ.

ಬಾಳೆ ನೆಟ್ಟರೆ ಅಡಿಕೆ ಸಸ್ಯಕ್ಕೆ ಬೆಳವಣಿಗೆಗೆ ಬೇಕಾಗುವ ಬೆಳಕಿನ ಕೊರತೆ ಆಗುತ್ತದೆ. ಬೆಳಕು ಕಡಿಮೆ ಆದರೆ ಅಡಿಕೆ ಗಿಡದ ಬೆಳವಣಿಗೆಯನ್ನು ಹತ್ತಿಕ್ಕಲ್ಪಡುತ್ತದೆ.

ಬಹಳಷ್ಟು ಜನರ ಅಡಿಕೆ ತೋಟಗಳಲ್ಲಿ ಸಪುರ, ಅನುತ್ಪಾದಕ ಮರಗಳು ಹೆಚ್ಚಾಗಿದ್ದರೆ ಅಲ್ಲಿ ಬಾಳೆ ನೆಡಲಾಗಿದೆ ಎಂದು ತಿಳಿಯಬಹುದು.

ಬಾಳೆ ಬೆಳೆಸಿದರೆ ಏನಾಗುತ್ತದೆ:

ಬಾಳೆಗೆ ತಾಯಿ ಬೇರು ಇಲ್ಲ. ಅಡಿಕೆಗೂ ತಾಯಿ ಬೇರು ಇಲ್ಲ. ಬಾಳೆಯ ಬೇರು ನೆಲದ ಪೂರ್ತಿ ಕೇವಲ 3-4 ತಿಂಗಳಲ್ಲಿ ಆವರಿಸುತ್ತದೆ. ಅಡಿಕೆ ಅದರ 5% ವೂ ಇಲ್ಲ.

ಬಾಳೆ ಬೆಳೆ ಕೆಲವೇ ಸಮಯದಲ್ಲಿ ಬಾರೀ ಬೆಳವಣಿಗೆಯಾಗುವ ಸಸ್ಯ. ಸುಮಾರು 6-7 ತಿಂಗಳಿಗೆ ಕನಿಷ್ಟ 6 ಅಡಿ ಸುತ್ತಳತೆಯನ್ನು ವ್ಯಾಪಿಸುತ್ತದೆ.

ಅಷ್ಟು ಬೆಳೆಯಬೇಕಿದ್ದರೆ ಅದು ಅಷ್ಟೇ ವೇಗವಾಗಿ ಲಭ್ಯವಿರುವ ಎಲ್ಲಾ ಪೋಷಕಾಂಶಗಳನ್ನೂ ಹೀರಿಕೊಳ್ಳುತ್ತದೆ.

ಬಾಳೆಯ ಬೇರಿನ ಬೆಳೆವಣಿಗೆ ದಿನಕ್ಕೆ 1-2 ಇಂಚಿನಷ್ಟು. ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆ ದಿನಕ್ಕೆ ಹೆಚ್ಚೆಂದರೆ 1-2 ಮಿಲಿ ಮೀಟರುಗಳಷ್ಟು.

ಇದನ್ನೂ ಓದಿ:ಅಡಿಕೆ ಸಸಿಗಳ ಆಯ್ಕೆ ಬಗ್ಗೆ ತಿಳಿಯಲು

ಅಡಿಕೆ ಸಸ್ಯಕ್ಕೆ ನಾವು ಕೊಡುವ ಎಲ್ಲಾ ಪೋಷಕಾಂಶಗಳನ್ನೂ ಬಾಳೆ ಸಸ್ಯವು ತನ್ನ ಆಹಾರ ದಾಹೀ ಬೇರುಗಳ ಮೂಲಕ ಮೊದಲು ಬಳಸಿಕೊಳ್ಳುತ್ತವೆ.

ಅಡಿಕೆ ಸಸಿಗಳಿಗೆ ಬೇಕಾದಾಗ ಪೋಷಕಗಳ ಲಭ್ಯತೆ ಇಲ್ಲದಾಗುತ್ತದೆ.

ಯಾವುದೇ ಸಸ್ಯವು ಉತ್ತಮವಾಗಿ ಬೆಳೆಯಲು ಅಗತ್ಯ ಪ್ರಮಾಣದಲ್ಲಿ ಬೆಳೆಕು ಬೇಕು. ಬಾಳೆಯನ್ನು ಬೆಳೆಸಿದಾಗ ಅವಶ್ಯಕತೆಗಿಂತ ಕಡಿಮೆ ಬಿಸಿಲು ಲಭಿಸಿ ಸರಿಯಾಗಿ ದ್ಯುತಿಸಂಸ್ಲೇಷಣ ಕ್ರಿಯೆ ನಡೆಯದೆ ಸಸ್ಯ ಬಡವಾಗುತ್ತದೆ.

ಬಾಳೆ ಬೆಳೆಗೆ ಅಧಿಕ ಪ್ರಮಾಣದಲ್ಲಿ ಜಂತು ಹುಳ( ನಮಟೋಡು) ಬಾಧೆ ಇರುತ್ತದೆ. ಇದು ಬಾಳೆಯಲ್ಲದೆ ಅಡಿಕೆ ಸಸ್ಯಕ್ಕೂ ವ್ಯಾಪಿಸುವ ಸಾಧ್ಯತೆ ಇದ್ದು, ಇದು ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ.

ಇನ್ನೂ ಬಾಳೆಯ ಕಾರಣದಿಂದ ( ಕಂದು, ಮಗುಚಿ ಬೀಳುವುದು ಇತ್ಯಾದಿ) ಉಂಟಾಗುವ ನಷ್ಟ ಬೇರೆ ಇದೆ.

ಮಳೆಗಾಲದಲ್ಲಿ ನೀರು ಹೆಚ್ಚಾಗಿ ಅಡಿಕೆ ಸಸಿಗಳ ಕೊಳೆಯುವಿಕೆಗೂ ಕಾರಣವಾಗುತ್ತದೆ.

ಅಡಿಕೆ ಸಸಿಯೊಂದಿಗೆ ಸೂಕ್ತ ಮಿಶ್ರ ಬೆಳೆ:

ಅಡಿಕೆ ಸಸಿ ನೆಟ್ಟು ಮೊದಲನೇ ವರ್ಷ ಬೆಳೆಸಬಹುದಾದ ಮಿಶ್ರ ಬೆಳೆಗಳಲ್ಲಿ ಅರಶಿನ – ಶುಂಠಿ ಅಥವಾ ಅನನಾಸು.

ಈ ಮೂರೂ ಬೆಳೆಗಳನ್ನೂ ಸಸಿ ಬೆಳೆಸಿದ ನಂತರ ಯಾವುದೇ ವರ್ಷದಲ್ಲೂ ಮಿಶ್ರ ಬೆಳೆಯಾಗಿ ಬೆಳೆಸಬಹುದು.

ಬಾಳೆಯನ್ನು ಅಡಿಕೆ ಸಸಿಗೆ ಸುಮಾರು 5 ವರ್ಷ ಕಳೆದ ನಂತರ ನಾಟಿ ಮಾಡಬೇಕು. ಈ ಸಮಯದಲ್ಲಿ ಬಾಳೆಗೆ ನೆರಳು – ಬೆಳೆಕು ಸಮನಾಗಿ ಹಂಚಿಕೆಯಾಗಿ ದೊರೆತು ಬಾಳೆಯ ಗೊನೆ ಉತ್ತಮ ಗಾತ್ರದಲ್ಲಿ ದೊರೆಯುತ್ತದೆ.

ಈ ಸಮಯದಲ್ಲಿ ಅಡಿಕೆ ಸಸಿ ಬಾಳೆಗಿಂತ ಎತ್ತರಕ್ಕೆ ಬೆಳೆದು ಬೆಳಕಿನ ಕೊರತೆ ಅನುಭವಿಸುವುದಿಲ್ಲ.

ನಾವು ತಿಳಿದಂತೆ ಬಾಳೆಗೆ ಸ್ವಲ್ಪ ಮಟ್ಟಿನ ನೆರಳು ಉತ್ತಮ ಇಳುವರಿಗೆ ಸಹಾಯಕವಾಗುತ್ತದೆ. ಅಡಿಕೆ ತೋಟಕ್ಕೂ ಫಲ ಕೊಡುವ ಸಮಯದಲ್ಲಿ ಇದು ಸೂಕ್ತಸೂಕ್ಷ್ಮ ವಾತಾವರಣವನ್ನು ಕೊಡುತ್ತದೆ.

ಗೊನೆ ಹಾಕಿದಾಗ ಬಾಳೆ ಯನ್ನು ಆಧರಿಸಲು ಅಡಿಕೆ ಮರಗಳು ನೆರವಾಗುತ್ತವೆ.

ಕೆಲವರು ಅಡಿಕೆ ಸಸಿಯ ಜೊತೆಗೆ ಬಾಳೆ ನಾಟಿ ಮಾಡಿದರೆ ಅಡಿಕೆಗೆ ನೆರಳು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ವಾದಿಸುತ್ತಾರೆ. ಅಡಿಕೆ ಸಸಿಗೆ ಅಂತಹ ನೆರಳು ಬೇಕಾಗಿಲ್ಲ. ಮಣ್ಣಿನ ಫಲವತ್ತತೆ ನಷ್ಟವಾಗದಂತೆ ಅಡಿಕೆ ಜೊತೆಗೆ ತೊಗರಿ ಸಸ್ಯವನ್ನು ನಾಟಿ ಮಾಡಿದರೆ ಸಾಕಾಗುತ್ತದೆ.ಅಡಿಕೆ ಸಸಿಗೆ ಮಕರ ಸಂಕ್ರಮಣದ ತನಕ ನೆರಳು ಹೆಚ್ಚು ಬೇಕಾಗುತ್ತದೆ. ನಂತರ ವಾತಾವರಣದಲ್ಲಿ ಅರ್ಧ್ರತೆ ಹೆಚ್ಚು ಇರುವ ಕಾರಣ ಅಂತಹ ತೊಂದರೆ ಇರುವುದಿಲ್ಲ.

ಸರಿಯಾದ ಪೋಷಕಾಂಶ ನಿರ್ವಹಣೆ ಮತ್ತು ಬೇಸಾಯ ಕ್ರಮದಲ್ಲಿ ನೆರಳು ರಹಿತವಾಗಿ ಚೆನ್ನಾಗಿ ಸಸಿ ಬೆಳೆಸಬಹುದು.

ಯಾರು ಮೊದಲ ಎರಡು – ಮೂರು ವರ್ಷ ಕಾಲ ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಸಲಿಲ್ಲವೋ ಅಲ್ಲೆಲ್ಲಾ ಅಡಿಕೆ ತೋಟ ದಲ್ಲಿ ಅನುತ್ಪಾದಕ ಮರಗಳು ತುಂಬಾ ಕಡಿಮೆ.

ಇದನ್ನೂ ಓದಿ: ಅಡಿಕೆ ತೋಟ ಮಾಡಬೇಕೇ? ಅದಕ್ಕೂ ಮೊದಲು ಇದೆಲ್ಲ ತಿಳಿದಿರಲಿ

ಅಡಿಕೆ – ತೆಂಗಿನ ಮರಕ್ಕೆ ಎಳೆಯ ಪ್ರಾಯದಲ್ಲಿ ಬುಡ ಭಾಗದಲ್ಲಿ ಬೊಡ್ಡೆ (Bole) ಬೆಳೆದರೆ ಅದರ ಶಕ್ತಿಯೇ ಬೇರೆ ಇರುತ್ತದೆ. ಅಧಿಕ ನೆರಳು, ಆಹಾರದ ಕೊರೆತೆ ಇದರಿಂದ ಬಹುತೇಕ ಅಡಿಕೆ ಸಸ್ಯಗಳು ಬೊಡ್ಡೆ ಬಿಡುವುದೇ ಇಲ್ಲ.

ಅಡಿಕೆ ಬೆಳೆಸುವ ರೈತರು ಸೂಕ್ತ ಮಿಶ ಬೆಳೆಯನ್ನು ಆರಿಸಿಕೊಂಡರೆ ಮೂರೇ ವರ್ಷದಲ್ಲಿ ಜಾಗದ ಮತ್ತು ಅಡಿಕೆ ತೋಟದ ಖರ್ಚನ್ನು ಅದರಲ್ಲಿ ಗಳಿಸಬಹುದು. ಸಸಿಯಾಗಿ ತಿಳಿದುಕೊಳ್ಳದೆ ಯಾರೋ ಹೇಳಿದರು ಎಂದು ಬಾಳೆ ಬೆಳೆದರೆ ಅಡಿಕೆ ತೋಟದ ಭವಿಷ್ಯ ಹಾಳಾಗುತ್ತದೆ.


Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಸೋಮವಾರ, ಜೂನ್ 6, 2022

ಅಡಿಕೆ ಕೊಳೆ ನಿಯಂತ್ರಣ ಮಾಡುದು ಹೇಗೆ....

ಮಳೆಗಾಲ  ಇನ್ನೇನು ಪ್ರಾರಂಭವಾಗಲಿದೆ. ಅಡಿಕೆಗೆ ಕೊಳೆಗಾಲ. ಅಂದರೆ  ಮಳೆ  ಬಿದ್ದ 15 ದಿನ  ನಂತರ  ಕೊಳೆ ಫಂಗಸ್  ಎಳೆಗಾಯಿಗಳ  ತೊಟ್ಟುಗಳನ್ನು ಪ್ರವೇಸಿಸಿ ಅಭಿರುದ್ಧಿ ಹೊಂದುವುದು.  ಇದರಿಂದ   ತೊಟ್ಟುಗಳು ಕೊಳೆತು  ಎಳೆಗಾಯಿ ಉದುರುವುವು (ಜೂನ್ -ಜುಲೈ ). ಆಗಸ್ಟ್ ತಿಂಗಳಲ್ಲಿ  ಮಳೆ  ಹೆಚ್ಚಾಗಿ ಅರೆ ಬಲಿತ  ಅಡಿಕೆ ಸಿಪ್ಪೆ ಮೇಲೆ ಬೂದು ಬಣ್ಣದ  ಫಂಗಸ್  ಬೆಳೆದು  ಕೊಳೆಯುವದರಿಂದ  ನೀರ್ಗೋಳೆ ಉಂಟಾಗುವುದು.  ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ  ಬಲಿತ  ಕಾಯಿಗಳಿಗೆ  ಬೂದು  ಗೊಳೆ ಬರುವುದು.
ನಿರ್ವಹಣೆ
1) ಮಣ್ಣಿಗೆ 1 ಎಕರೆಗೆ  2 ಕ್ವಿoಟಾಲ್  ಕೃಷಿ  ಸುಣ್ಣ ಕೊಡಿ
2) ಕಳೆದ  ವರ್ಷ ಕೊಳೆ ಪೀಡಿತ  ಸತ್ತ  ಹಿಂಗಾರಗಳನ್ನು  ತೆಗೆಯಿರಿ
3) ಬಸಿಗಲುವೇಗಳನ್ನು  ಸ್ವಚ್ಛಗೊಳಿಸಿ, ಕೊಳೆಪೀಡಿತ ಉದುರಿದ ಕಾಯಿಗಳನ್ನು  ತೆಗೆಯಿರಿ
4) ಅಂತರ ಬೆಳೆಗಳ  ಮತ್ತು ಕಾಡುಮರಗಳ  ಹೆಚ್ಚುವರಿ ರೆಂಬೆ ಕೊಂಬೆಗಳನ್ನು  ಕತ್ತರಿಸಿ  ತೆಗೆಯಿರಿ
5) ತಟಸ್ತ ಗೊಳಿಸಿದ ( ರಸಸಾರ  6.5 ರಿಂದ 7.5 ) ಶೇಕಡಾ  1 ರ  ಬೋರ್ಡೊ ದ್ರಾವಣ  ಸಿಂಪರಿಸಿ. ಇದಕ್ಕೆ ಬದಲಾಗಿ   ಶೇ. O.25 ರ ( 200 ಲೀಟರ್ ನೀರಿಗೆ 500 ಗ್ರಾಂ ) ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಶೇo.2ರ ( 200 ಲೀಟರ್ ನೀರಿಗೆ  400ಗ್ರಾಂ ) ಮೆಟಲಕ್ಸಿಲ್ ಎಂ ಜಡ್ಸಿಂಪರಿಸಿ.) ಮಳೆ  ಹೆಚ್ಚು  ಬೀಳುವ  ಪ್ರದೇಶಗಳಲ್ಲಿ  ಬೋರ್ಡೋ ಸಿಂಪರಣೆ  ನಂತರ ಪ್ಲಾಸ್ಟಿಕ್ ಕೊಟ್ಟೆ ಕಟ್ಟಬಹುದು.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಗುರುವಾರ, ಜೂನ್ 2, 2022

KGF ನಟ ಯಶ್ ಕ್ಯಾಸನೂರು ತಳಿ ಅಡಿಕೆ ತೋಟದ ಸಿದ್ದತೆ

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಿರುವುದು ಎಲ್ಲರಿಗೂ ಗೊತ್ತು. ಇದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಶಕ್ತಿಯನ್ನು ಇಡಿ ದೇಶಕ್ಕೆ ಮತ್ತು, ಹೊರದೇಶಕ್ಕೂ ಕೂಡ ಈ ಕೆಜಿಎಫ್ ಸಿನಿಮಾ ಮೂಲಕ ತೋರಿಸಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಕುಟುಂಬದ ಜೊತೆ ಈಗ ಕಾಣಿಸಿಕೊಳ್ಳುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಕುರಿತಾಗಿ ಇನ್ನೊಂದು ವಿಚಾರ ಹೊರಗಡೆ ಬೀಳುತ್ತಿದೆ.

ಯಶ್ ಅವರ ಮುಂದಿನ ಸಿನಿಮಾ ಯಾವುದು.? ಯಾರು ನಿರ್ದೇಶಕರು ಎನ್ನುವ ವಿಚಾರ ಇಷ್ಟರಲ್ಲೆ ತಿಳಿಯುತ್ತಿದ್ದು, ಯಶ್ ಅವರ 19ನೇ ಚಿತ್ರ ಸೆಟ್ಟೇರಲಿದೆಯಂತೆ. ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ ಎಂದು ಕೇಳಿಬರುತ್ತಿದೆ. ಕೆಜಿಎಫ್ ಸಿನಿಮಾ 50 ದಿನ ಪೂರೈಸಿದ ದಿನವೇ ಈ ಮಾಹಿತಿ ಹೊರ ಬೀಳುತ್ತಿದೆ ಎಂದು ಕೇಳಿ ಬಂದಿದೆ. ಹೌದು ಯಶ್ ಅವರು ಅವರ ತಂದೆ ತಾಯಿಗೆ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಒಂದು ಫಾರ್ಮ್ ಹೌಸ್ ಕೊಂಡುಕೊಂಡ ಯಶ್, ತೋಟಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಕೂಡ ನೀಡಿದ್ದಾರೆ. ತಂದೆ ತಾಯಿಗೆ ಹಾಗೂ ತಂಗಿಗೂ ಸಹ ದುಬಾರಿ ಗಿಫ್ಟ್ ನೀಡಿದ್ದಾರೆ. ಹಾಗೆ ತಂದೆ-ತಾಯಿಗೆ ಓಡಾಡಲು ಟಾಟಾ ವೆಲ್ಫೇರ್ ದುಬಾರಿ ಕಾರನ್ನು ಕೂಡ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ನಟನೆ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಸಾಹೇಬ್ರು ದರ್ಶನ ಸಾಹೇಬ್ರ ಹಾಗೆ ತೋಟ ಮಾಡೋಕೆ ಮುಂದಾಗಿದ್ದು ಈಗ ಸುದ್ದಿಯಾಗಿದೆ. ಯಶ್ ಅವರು ಈಗಾಗಲೇ ತೇಜ್ ನರ್ಸರಿಯ ಶಿವನಪುರ ರಮೇಶ ಅವರನ್ನ ಬೇಟಿಯಾಗಿ ಅಡಕೆ ತೋಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಹಳ ಕಡೆ ಕೇಳಿಪಟ್ಟ ಕ್ಯಾಸನೂರು ಅಡಿಕೆ ತಳಿ ಬೆಳೆಯಲು ಉತ್ಸುಕರಾಗಿದ್ದ ಯಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಪ್ರಾಯ ಪಡೆದ್ದಿದ್ದಾರೆ. ದರ್ಶನ ಅವರು ಕೂಡ ಕ್ಯಾಸನೂರಿನ ಮಹಾಬಲೇಶ್ವರ ಅವರ ಬಳಿ ಅಡಿಕೆ ಸಸಿ ಪಡೆದು ಹಾಕಿರುವ ತೋಟ ತೋರಿಸಿ ಇದೇ ತಳಿ ಹಾಕುವಂತೆ ಸಲಹೆ ನೀಡಿದದ್ದಾರೆಂದು ಶಿವಪುರ ರಮೇಶ್ ಮಾಧ್ಯಮಗಳ ಮುಂದೆ ಯಶ್ ಫ್ಲಾನ್ ಹೊರಹಾಕಿದ್ದಾರೆ. ಯಾವಾಗಲೂ ಅಡಿಕೆಗೆ ಅಧಿಕ ಬೆಲೆ ಇರುವುದರಿಂದ ಅಧಿಕ ಇಳುವರಿ ಕೊಡುವ ಸದೃಢ ಮರವಾಗುವ ಯಾವುದೇ ರೋಗರುಜನೆಗಳಿಗೆ ತುತ್ತಾಗದ ಕ್ಯಾಸನೂರು ಸ್ಥಳೀಯ ಅಡಿಕೆಯ ಸಸಿಗಳಿಗಾಗಿ ಕ್ಯಾಸನೂರು ಮಹಾಬಲೇಶ್ವರ ಅವರನ್ನ ಸಂಪರ್ಕಿಸಿದ್ದಾರೆಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಹಾಬಲೇಶ್ವರ ಪತ್ರಕರ್ತರಾಗಿ ಕನ್ನಡದ ಅನೇಕೆ ಚಾನೆಲ್‌ಗಳಲ್ಲಿ ಕೆಲಸ ಮಾಡಿ ಅಜ್ಜ ಮಾಡಿದ್ದ ತೋಟ ಮನೆ ನೋಡಿಕೊಂಡು ಕೃಷಿ ಬದುಕು ನಡೆಸುತ್ತಿದ್ದಾರೆ. ಇವರಲ್ಲಿ ಸಹಜವಾಗಿ ಆರ್ಗಾನಿಕ್ ಆಗಿ ಬೆಳೆದ ಆಯ್ದ ಬೀಜಗಳಿದ್ದ ಮಾಡಿದ ಉತ್ತಮ ಅಡಿಕೆ ಸಸಿಗಳನ್ನ ಮಾಡಿ ತಮ್ಮ ಸ್ನೇಹಿತರಿಗೆ ಮಾತ್ರ ಮಾರುತ್ತಾರೆಂದು ಶಿವನಪುರ ರಮೇಶ್ ಹೇಳಿದರು. ಈಗಾಗಲೆ ಶಿವನಪುರ ರಮೇಶ್ ಅನೇಕ ಸೆಲೆಬ್ರಿಟಿಗಳಿಗೆ ಇವರ ಬಳಿ ಅಡಿಕೆಸಸಿಗೆ ಸಂಪರ್ಕಿಸುತ್ತಾರೆ.
ಯಶ್ ಕೂಡ ಕೃಷಿ ಒಲವು ಹೊಂದಿದ್ದು ದರ್ಶನ್ ತರ ಒಂದೊಳ್ಳೆ ಫಾರ್ಮ್ ಅದರ ಜೊತೆಗೆ ಅಡಿಕೆ ತೋಟ ಮಾಡುವ ಇಚ್ಚೆ ನೋಡಿದರೇ ಎಂಥವರಿಗೂ ಹೆಮ್ಮೆ ಎನ್ನಿಸುತ್ತಿದೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಸೋಮವಾರ, ಫೆಬ್ರವರಿ 21, 2022

ಅಡಿಕೆ ತೋಟ ಮಾಡುತ್ತೇನೆಂದರೆ ಸಾಲದು ಅದಕ್ಕೂ ಮೊದಲು ಇವೆಲ್ಲ ತಿಳಿದಿರಬೇಕು


1) ಮೊಟ್ಟಮೊದಲು ತಳಿ ಯಾವುದು ಎಂದು ತಿಳಿಯಬೇಕು
ತಳಿಗಳಲ್ಲಿ ಮಲೆನಾಡಿನ ತಳಿ ಉತ್ತಮ ಮಲೆನಾಡಿನ ಕ್ಯಾಸನೂರು ಸೀಮೆ ಮತ್ತು ಕೆಳದಿ ಸೀಮೆ ಭಾಗದ ಅಡಿಕೆ ಅಧಿಕ ಇಳುವರಿ ಮತ್ತು ರಾಶಿ ಮತ್ತು ಚಾಲಿಗೆ ಹೇಳಿ ಮಾಡಿಸಿದ ಅಡಿಕೆ. ಬಹುತೇಕ ಸಸಿಮಾಡುವವರು ಎಲ್ಲೆಲ್ಲಿಯೋ ಬೀಜ ಸಂಗ್ರಹಿಸಿ ತೀರ್ಥಹಳ್ಳಿ, ಸಾಗರ, ಸೊರಬ, ಕ್ಯಾಸನೂರು, ಕೆಳದಿ, ಚನ್ನಗಿರಿ ಎಂದು ಸುಳ್ಳು ಹೇಳಿ ಮಾರುತ್ತಾರೆ

2) ಬೀಜದ ಆಯ್ಕೆ ಬಹಳ ಮುಖ್ಯ. ತಾಯಿ ಮರ 35 ರಿಂದ 65 ವರ್ಷ ಒಳಗಿನ ಬೀಜ ಉತ್ತಮ. ಯಾಕೆಂದ ಸಸ್ಯಶಾಸ್ತ್ರದಲ್ಲೂ ವಂಶಾಭಿವೃದ್ಧಿಗೆ ಅದರಲ್ಲೂ ಅಡಿಕೆಯಂತ ಜಾತಿಯ ಸಸಿಗಳಿಗೆ ಪ್ರಾಯ ಮುಖ್ಯ.

3) ಸಸಿಗಳು ಸಹಜವಾಗಿ ನೈಸರ್ಗಿಕವಾಗಿ ಯಾವುದೇ ರಾಸಾಯನಿಕಗಳನ್ನ ಬಳಸದೇ ಬೆಳೆಸಿರ ಬೇಕು. ಬಹಳಷ್ಟು ರೈತರು ಹಣದ ಆಸೆಗೆ ರೈತರಿಗೆ ಮೋಸ ಮಾಡುತ್ತಾರೆ. ಗಿಡ ಎತ್ತರ ದಪ್ಪ ಇದ್ದರೆ ಹಸಿರಾಗಿದ್ದರೆ ಎಷ್ಟು ಬೆಲೆ ಹೇಳಿದರೂ ಕೊಳ್ಳುರು ಎಂಬ ದುರಾಸೆಗೆ ನಾನಾ ಬಗೆಯ ರಸಾಯನಿಕ ಬಳಸಿ ಬೆಳೆಯುತ್ತಾರೆ. ಇಂತಹ ಸಸಿಗಳು ಮುಂದೆ ಹಾಕಿದ ಕೂಡಲೇ ಅನೇಕ ಬಾದೆಗಳಿಗೆ ತುತ್ತಾಗುತ್ತವೆ. ಆಯುಷ್ಯ ಇವಕ್ಕೆ ಕಡಿಮೆ. ಭವಿಷ್ಯದಲ್ಲಿ ಶಾರೀರಿಕ ಸಮಸ್ಯೆಗಳಿಂದ ಹಲವು ಮರಗಳು ಫಸಲನ್ನ ಸರಿಯಾಗಿ ನೀಡುವುದಿಲ್ಲ
4) ನಂತರ ಅಧಿಕ ಬಿಸಿಲಲ್ಲಿ ಇಟ್ಟು ಬೆಳೆಸಿದ ಗಿಡಗಳು ಕೊಂಡು ಹಾಕಿದರೇ ನೀವು ನೆಟ್ಟ ಒಂದು ವರ್ಷದ ವರೆಗೆ ನೆರಳು ಮಾಡುವ ಅಗತ್ಯ ಬಹುತೇಕ ಇರುವುದಿಲ್ಲ. ಹಚ್ವಹಸಿರಾದ ಗಿಡಗಳು ಬಿಸಿಲಿಗೆ ನರಳುತ್ತವೆ.

5) ಗಿಡಗಳು ಅಧಿಕ ಎತ್ತರ ಇರಬಾರದು. ನರ್ಸರಿಯಲ್ಲಿ ಗಿಡಗಳು ಒಂದರ ಪಕ್ಕ ಒಂದು ಇಟ್ಟು ಬೆಳೆಸುವ ಕಾರಣ. ಅವುಗಳಿಗೆ ಅಹಾರ ಸಂಪೂರ್ಣ ಸಿಕ್ಕಾಗ ಎತ್ತರ ಬೆಳೆಯುತ್ತವೆ. ಸ್ಟೆಮ್ ಅಂದರೆ ಕಾಂಡ ದಪ್ಪ ಇರುತ್ತವೆ ನಿಜ. ಆದರೆ ಸಾಲಿನ ಅಂಚಿನ ಗಿಡಗಳು ಬಿಟ್ಟು ಒಳಗಿನ ಸಸಿಗಳ ಗರಿಗಳು ಕಡ್ಡಿಯಂತಾಗಿರುತ್ತವೆ. ನಾವು ಕೊಂಡುತಂದು ಹಾಕಿದ ನಂತರ ಗಾಳಿಗೆ ಬಳಕು ನೆಲಕ್ಕೆ ಬೀಳುತ್ತವೆ. ಮತ್ತೊಂದು ಹೊಸ ಸುಳಿ ಗರಿಯಾಗುವ ವರೆಗೆ ಸಸಿಗಳು ನರಳುತ್ತವೆ. ಸಸಿಗಳು ಎಷ್ಟೇ ಚಿಕ್ಕದಿದ್ದರೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ನೆಲದಲ್ಲಿ ಗಾಳಿ ನೀರು ಆಹಾರಕ್ಕೆ ಬಹುಬೇಗ ಸದೃಢವಾಗಿ ಬೆಳೆಯುತ್ತವೆ.
6) ಸಸಿಗಳನ್ನು ಬೆಳೆಯುವವರು ಯಾರೆಂದು ತಿಳಿಯುವುದು ಅತೀಮುಖ್ಯ. ಬಹಳಷ್ಟು ಸಸಿ ಮಾಡುವ ರೈತರು ಅಡಿಕೆ ಸಸಿ ಮಾಡುವ ಕಸುಬು ಲಾಭದಾಯಕ ಎಂದು ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಯಾವ ಬೀಜಗಳನ್ನ ಬೇಕಾದರೂ ಬೆಳೆಯುವರು. ಸಸಿಗಳಿಗೆ ರಾಸಾಯನಿಕ ಬಳಸಿ ಮಾಡುವರು. ಅದನ್ನ ತಿಳಿಯ ಬೇಕಾದರೆ ಕೃಷಿ ಅಥವಾ ತೋಟಗಾರಿಕೆ ಅಧಿಕಾರಿಗಳ ಸಂಪರ್ಕಿಸಿ ಗಿಡದ ತುದಿಯ ಒಂದು ಇಂಚಿನಷ್ಟು ಎಲೆ ಕತ್ತರಿಸಿ ಇಟ್ಟುಕೊಂಡು ಪರೀಕ್ಷೆಗೆ ಕಳಿಸಿ ಅದು ಸಾವಯವ ಸಸಿಯೋ ರಾಸಾಯನಿಕ ಸಸಿಯೋ ರಿಪೋರ್ಟ್ ಬಂದಮೇಲೆ ಕೊಳ್ಳಿ. ಹಾಪ್ಸಕಾಮ್‌ನಲ್ಲೂ ಸಾವಯವ ಟೆಸ್ಟ್ ಮಾಡುತ್ತಾರೆ.

ಇನ್ನೂ ಅನೇಕೆ ಅಂಶಗಳು ಇವೆ. ಇವು ಅತೀ ಮುಖ್ಯವಾದವು ಅಧಿಕೆ ಮಾಹಿತಿಗೆ ಕೆಳಗಿನ ಲಿಂಕ್‌ನಲ್ಲಿ ಯಾರೋ ಒಬ್ಬ ಪುಣ್ಯಾತ್ಮ ಅಧಿಕೃತ ಮಾಹಿತಿ ನೀಡಿದ್ದಾರೆ  ಓದಿ ನೋಡಿ.. 
👆ಇಲ್ಲಿ ಕ್ಲಿಕ್ ಮಾಡಿ

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಅಡಿಕೆ ತೋಟ ಮಾಡಬೇಕೇ ಹಾಗಿದ್ದರೇ ಖಂಡಿತ ಇದನ್ನ ಓದಿ

 ಕ್ಯಾಸನೂರು ಅಡಿಕೆಯು ಬಹಳ ಪ್ರಮುಖ ಹೆಸರುವಾಸಿ ತಳಿಯ ಸಸಿಗಳು.👇


ಅಡಿಕೆ ಬೆಳೆಯುವವರು ಪ್ರಪ್ರಥಮ ಆಯ್ಕೆ ಮಾಡಬೇಕಾದದ್ದು ತಳಿಯನ್ನ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ ಮತ್ತು ಭವಿಷ್ಯ ಸುಧೀರ್ಘ. ಇದು ಮನೆ ಕಟ್ಟುವುದಕ್ಕೆ ಪೌಂಡಿಷನ್ ಹಾಗೂ ಪಂಚಾಂಗ ಹಾಕಿದಂತೆ. ನಿಮಗೆ ಗೊತ್ತಿರುವಂತೆ ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡುವವರೇ ಸಸಿ ಬೆಳಸಿದವರಿಂದ ತರಿಸಿಕೊಂಡರೆ ಬಹಳ ಉತ್ತಮ.
ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ  ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ  ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ.
ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ)
ಉಳಿದೆಡೆಯ ತಳಿಯೇ ಬೇರೆ. 
ದಾವಣಗೆರೆ, ಭೀಮ ಸಮುದ್ರ, 
ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ.
ಅಲ್ಲದೇ ಅಭಿವೃದ್ಧಿ ಪಡಿಸಿದ ತಳಿಗಳು ಇವೆ ಇವು ಕ್ಯಾಸನೂರು ತಳಿಯಷ್ಟು ಇಳುವರಿಯು ಇಲ್ಲ ಅರೋಗ್ಯವಂತ ಮರಗಳು ಆಗುವುದಿಲ್ಲ. ಆಗಾಗ ಎಲ್ಲ ಬಗೆಯ ರೋಗಬಾದೆಗೆ ತುತ್ತಾಗಿ ಸಾಯುತ್ತವೆ. ಅಧಿಕ ಆರೈಕೆ ಬೇಡುತ್ತವೆ ಮುತುವರ್ಜಿಯಿಂದ ನೋಡಿಕೊಳ್ಳುವುದೇ ತ್ರಾಸದಾಯಕವಗಿರುತ್ತದೆ. ಅಂತಹ ಸುಧಾರಿತ ಹಾಗೂ ಅಭಿವೃದ್ಧಿ ಪಡಿಸಿದ ತಳಿಗಳೆಂದರೆ ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ನಾನಾ ಜಿಲ್ಲೆಯಲ್ಲಿದ್ದರು ಇಳುವರಿ ಕಮ್ಮಿ ದಾಟುಗಣ್ಣು ಅಂದರೆ ಬೇಗ ಬೆಳೆದು ಬೇಗ ಬೀಳುತ್ತದೆ), ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಲ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2  ಇವುಗಳನ್ನ ಬೆಳೆದು ಕೈಸುಟ್ಟಕೊಂಡವರಿದ್ದಾರೆ.
ಆದರೆ ಕ್ಯಾಸನೂರು ಅಡಿಕೆ ತಳಿಯನ್ನ ಮೇಲೆ ಹೇಳಿದ ಈ ಎಲ್ಲಾ ಭೂಪ್ರದೇಶದಲ್ಲಿ ಬೆಳದವರಿದ್ದಾರೆ ಅಲ್ಲೆಲ್ಲ ಉತ್ತಮವಾಗಿಯೇ ಹೊಂದಿಕೊಂಡು ಬೆಳೆದು ಕಡಿಮೆ ಕಾಳಜಿಯಲ್ಲಿ ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ.
Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಕರಾವಳಿ ಜನ, ಮಂಗಳೂರು ಹಾಗೂ ಚಿಕ್ಕಮಗಳೂರು ಜನ, ಹಾವೇರಿ, ಹಾನಗಲ್, ದಾವಣಗೆರೆ, ತೀರ್ಥಹಳ್ಳಿ, ತಮಿಳುನಾಡು, ಆಂಧ್ರ, ಬೆಂಗಳೂರಿನ ನಾನಾ ಕಡೆ ಈ ತಳಿ ಬೆಳೆದು ಇದೇ ತಳಿ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಈ ತಳಿಯು ಅಲ್ಲಲ್ಲಿ ಬೆಳೆದ ಬೀಜಕ್ಕಿಂತ ಇಲ್ಲಿನ ಮೂಲ ಸಸ್ಯಗಳ ಬೀಜದ ಸಸಿಗಳೇ ಉತ್ತಮ ಎಂದು ಬೆಳೆದವರು ಹೇಳುತ್ತಾರೆ. ಜೊತೆಗೆ ಸಹಜವಾಗಿ ಯಾವುದೇ ರಾಸಾಯನಿಕ ಬಳಸದೆ ಬೆಳಸಿದ ಸಸಿಗಳನ್ನು ಕೊಂಡು ತರಬೇಕು. ಇತ್ತೀಚೆಗೆ ಅಡಿಕೆ ಸಸಿ ಲಾಭದಾಯಕ ಕಸುಬಾಗಿದೆ ಹಾಗಾಗಿ ರೈತರೇ ರೈತರಿಗೆ ಮೋಸ ಮಾಡಿ ಯಾವ ಯಾವುದೋ ತಳಿಯನ್ನ ಕ್ಯಾಸನೂರು ತಳಿಎಂದು ಹೇಳಿಕೊಂಡು ಮಾರತ್ತಾರೆ. ಗಿಡಗಳು ದಷ್ಟ ಪುಷ್ಟವಾಗಿ ಕಾಣಲೆಂದು ಟಾನಿಕ್ ಬಳಸಿರುತ್ತಾರೆ. ಇವು ಉತ್ತಮವಲ್ಲ. ಕ್ಯಾಸನೂರು ಗ್ರಾಮದಲ್ಲಿ ಮಹಾಬಲೇಶ್ವರ ಎಂಬ ಯುವ ರೈತರು ರಾಸಾಯನಿಕ ಮುಕ್ತ ಸಹಜವಾಗಿ ಸಸಿ ಬೆಳೆಸಿ ಮಾರುತ್ತಾರೆ.

ಕ್ಯಾಸನೂರು ಸೀಮೆ ಅಡಿಕೆ:
ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ. ಕೆಳದಿಯ ಅರಸರ ಆಳ್ವಿಕೆಯ  ವ್ಯಾಪ್ತಿ ಎಲ್ಲಿ ತನಕ ಇತ್ತೋ  ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು. ಆದರೆ ಕ್ಯಾಸನೂರಿನ ಅಡಿಕೆಯೇ ಬಹಳ ಸೂಕ್ತ. ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ  ಸ್ಥಳೀಯ ತಳಿ.

ಕೆಳದಿಯ ಅರಸರ ಕಾಲದಲ್ಲಿ  ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಪೂರ್ಜರು. ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ.

ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ.
ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 17-18 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು. ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 22-27 ಕ್ವಿಂಟಾಲು ಸಹ ಪಡೆಯುತ್ತಾರೆ. ಕೆಂಪಾದರೆ ಎರಡು ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ. ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ. ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು. ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು  ಒತ್ತೊತ್ತಾಗಿ ಕಾಯಿಗಳು.  ಅಡಿಕೆಯಲ್ಲಿ  ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 190-210 ಅಡಿಕೆ ಮತ್ತು ಕೆಂಪಾದರೆ 280-310 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು.
ಕ್ಯಾಸನೂರು ಗಿಡದ ಲಕ್ಷಣಗಳು
1) ಮರದ ಗಣ್ಣು ಹತ್ತಿರವಾಗಿರುತ್ತವೆ. ಇದಕ್ಕೆ ಅಂತರ  ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು.
ಪ್ರಾರಂಭದ ಕೆಲವು ವರ್ಷ ಗಣ್ಣು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ.

2) ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 70 ರಿಂದ 100 ವರ್ಷದ ಅಡಿಕೆ ಮರಗಳು ಇವೆ.

3) ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು.

4) ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ.

ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ತಳಿ ಅಧ್ಯಯನ:
ಕರ್ನಾಟಕ ತೋಟಗಾರಿಕೆ ಇಲಾಖೆಯ ಸಲಹೆ ಮೆರೆಗೆ ಅಡಿಕೆ ತೋಟದ ಅಧ್ಯಯನ ಕೈಗೊಂಡಾಗ ಕ್ಯಾಸನೂರು ಅಡಿಕೆ ಉತ್ತಮವಾಗಿರುವುದು ಕಂಡುಬಂತು ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ನಾನಾ ಭಾಗಗಳಲ್ಲಿ ಬೆಳೆಸಿ ಅಧ್ಯಯನ ಮಾಡಿದರು. ಎಲ್ಲ ಕಡೆ ಇಲ್ಲಿಯ ತಳಿ ಉತ್ತಮವಾಗಿಯೇ ಬಂದಿತು. ಇವರ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶ ಏನೆಂದರೇ ಇಲ್ಲಿಯ ತಳಿ ಬೇರೆಡೆ ಬೆಳೆದರೂ ಅಲ್ಲಿಯ ಬೀಜ ಸರಿ ಬರುವುದಿಲ್ಲ. ಇಲ್ಲಿಂದಲೇ ಬೀಜ ತೆಗೆದುಕೊಳ್ಳಬೇಕು. ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ. ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ  ಮಾಡಬೇಕು.
ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ಕ್ಯಾಸನೂರಿನ ಕುಶಾನ್ ಮಹಾಬಲೇಶ್ವರ ಮತ್ತು ಕುಶಾನ್ ರಾಮಚಂದ್ರಾವರು  ಕೊಟ್ಟ ಬೀಜ ಹಾಗೂ ಸಸಿಗಳನ್ನೇ ಬೆಳೆಸುವುದು. ಸೊರಬ - ಸಾಗರ - ಶಿಕಾರಿಪುರ - ಶಿವಮೊಗ್ಗ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ಮಹಾಬಲೇಶ್ವರರ ಹೆಸರು ಇಲ್ಲಿನ ಬೀಜ ತಂದು ತೋಟ ಮಾಡಿದವರಿಗೆ ಎಲ್ಲರಿಗೂ ಗೊತ್ತು. ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ.

ಈ ಪ್ರದೇಶದ ಅಡಿಕೆಯ  ಇಳುವರಿಯನ್ನು  ನೋಡಿದರೆ ಎಂತವರೂ ದಿಗಿಲಾಗಬೇಕು. ಇದು ಕರಾವಳಿಯಲ್ಲೂ ಅದೇ ಗುಣ ತೋರಿಸುತ್ತದೆ. ಅಲ್ಲದೇ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚು. ಉಳಿದಂತೆ ಮಲೆನಾಡು, ಬಯಲು ಸೀಮೆ ಎಲ್ಲಾ  ಬಾಗಕ್ಕೂ ಹೊಂದುವ ತಳಿ.  ಕೆಲವು ಮೂಲಗಳ ಪ್ರಕಾರ ರಾಜ್ಯದಾದ್ಯಂತ ಇರುವ ಅಡಿಕೆ ತೋಟಗಳಲ್ಲಿ ಅರ್ಧ ಭಾಗ ಈ ತಳಿಯದ್ದೇ ಆಗಿರುತ್ತದೆ. ಇಲ್ಲಿರುವ ಬಹುತೇಕ ನರ್ಸರಿಗಳು ಈ ಪ್ರದೇಶಗಳ ಬೀಜಗಳನ್ನೇ ಸಸಿ ಮಾಡಿ ಮಾರಾಟ ಮಾಡುವುದಾಗಿರುತ್ತದೆ. ಆದರೆ ಅವರೆಲ್ಲ ಹಣದ ದುರಾಸೆಗೆ ಬಿದ್ದು ಇಲ್ಲಿಯ ಹೆಸರು ಹೇಳುತ್ತಾರೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ಕರೆ ಸಂಪರ್ಕ:
ಮಹಾಬಲೇಶ್ವರ ಕ್ಯಾಸನೂರು +918095739929